Posts

Showing posts from February, 2023

ಜಾತಿ,ಮತ,ಬಿಟ್ಟಿ ಭಾಗ್ಯಗಳು ಮತ್ತು ರಾಜಕೀಯ!| Religion&Politics,Freebies&Votes,Secularism&Discrimination_Go Hand in hand

Image
  ಜಾತಿ ರಾಜಕಾರಣದಲ್ಲಿ ಅಗ್ರಪಂಕ್ತಿ  ಕಾಯ್ದುಕೊಳ್ಳುವ ಕುಮಾರ ಸಿದ್ದರು ಒಂದೆಡೆಯಾದರೆ, ಎಲ್ಲವ ಉಚಿತದಿ ನೀಡುವ ಕ್ರೇಜ್ ಇನ್ನೊಂದೆಡೆ!  ಆಯಾ ಪ್ರದೇಶದಲ್ಲಿ ಯಾವ ಜಾತಿಯವರು ಹೆಚ್ಚಿರುವರೊ ಅವರಲ್ಲೇ ಒಬ್ಬಾತನಿಗೆ ಚುನಾವಣೆಗೆ ನಿಲ್ಲಲು ಟಿಕೆಟ್ ಕೊಡಿ ಎಂದು ದೇಶದ ಪ್ರಪ್ರಥಮ ಚುನಾವಣೆಯಲ್ಲಿ ತನ್ನ ಸಂಗಡಿಗರಿಗೆ ಕರೆ ಕೊಟ್ಟಿದ್ದನಂತೆ ಒಬ್ಬಾತ, ಆತ ಒಬ್ಬ ಮಹಾತ್ಮನ ಸ್ನೇಹಿತನಂತೆ, ಅಲ್ಲಿಂದಲೇ ಶುರುವಾಯಿತು ಎಂದು ಆರೋಪ ಹೊರಿಸಿಯೂ ಹೊರಿಸದವರಂತೆ ಇದ್ದರೆ ನಾವು ಕ್ಷೇಮ!  ಇಂದಿನ ಅನೇಕ ಯುವಕ ಯುವತಿಯರು ತಾವು ಪೊಲಿಟಿಕಲಿ ನ್ಯೂಟ್ರಲ್, ಆದರೂ ಈ ಪಕ್ಷಕ್ಕೆ ತಮ್ಮ ಬೆಂಬಲ ಏಕೆಂದರೆ ಅದು ಜಾತ್ಯಾತೀತ(ಜಾತಿ+ಅತೀತ) ಎಂದು ಉತ್ತರಿಸುವ ರೀತಿ ಹಾಸ್ಯಾಸ್ಪದವಾಗಿ ತೋರುತ್ತದೆ.  ಈ ಜಾತ್ಯಾತೀತ ಪಕ್ಷಗಳ ನಾಯಕರೆನಿಸಿಕೊಂಡವರು, ನಮ್ಮ ಪಕ್ಷ ಗೆದ್ದರೆ ದಲಿತ ಮುಖ್ಯಮಂತ್ರಿ, ನಮ್ಮ ಪಕ್ಷ ಗೆದ್ದರೆ ಮುಸ್ಲಿಂ ಮುಖ್ಯಮಂತ್ರಿ ಎಂದು ಹೇಳಿಕೆಗಳನ್ನು ಕೊಡುವುದ ನೋಡಿದರೆ ಇವರುಗಳು ಆಯಾ ಜಾತಿವಾರು ನೇತಾರರೇನೋ ಎಂದೆನಿಸುತ್ತದೆ. ಆದರೆ ಇವರುಗಳು ಜಾತ್ಯಾತೀತ ಜಾತಿವಾದಿಗಳಂತೆ ವರ್ತಿಸುತ್ತಾರೆ. ಪಾಶ್ಚಾತ್ಯ ದೇಶಗಳಲ್ಲಿ ಅಭ್ಯರ್ಥಿ ಒಬ್ಬ ಚುನಾವಣೆ ಗೆದ್ದರೆ ಯಾವ ರೀತಿಯ ಆರ್ಥಿಕ ನೀತಿಯನ್ನು ಅನುಷ್ಠಾನಗೊಳಿಸುವೆ ಎಂಬ ಆತನ ವಾದ, ಮತ್ತು ಅದು ದೇಶಕ್ಕೆ ಹೇಗೆ ಉಪಯುಕ್ತ ಎಂದು ಪ್ರತಿಸ್ಪರ್ಧಿಯ ಜೊತೆ ಮುಖಾಮುಖಿಯಾಗಿ  ಚರ್ಚೆ ನಡೆಸುತ್ತಾನ...

ಬೆಂಗಳೂರಲ್ಲಿ ಸಿಗುವ ಅರೆ ಬೆಂದ ಕನ್ನಡ |Reality of Kannada Horata

Image
                  ಬೆಂಗಳೂರಲ್ಲಿ ಸಿಗುವ ಅರೆ ಬೆಂದ ಕನ್ನಡ  ಕನ್ನಡದ ಹೋರಾಟ ಕೇವಲ ಸಾಮಾಜಿಕ ಮಾಧ್ಯಮ, ದಿನಪತ್ರಿಕೆಗಳ ಅಂಕಣ, ದೂರದರ್ಶನದ ಸಂದರ್ಶನಗಳಿಗಷ್ಟೇ ಸೀಮಿತವೇನೋ ಎನ್ನುವಷ್ಟು ಕನ್ನಡದ ಹೋರಾಟ ತಲುಪಿರುವುದು ವರ್ಣನಾತೀತ.ಕೇವಲ ಭಾಷೆಯನ್ನೇ ವಿಷಯದ ಮಿತಿಯಾಗಿಸಿ ಒಮ್ಮೆ ಕಣ್ಣು ಹಾಯಿಸುವುದಾದರೆ ವಾಸ್ತವತೆಯನ್ನು ಬದಿಗೊತ್ತದೇ ಕರುನಾಡ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕನ್ನಡದ ಕಂಪು ಉಳಿದಿದೆ ಎಂಬುದು ಒಂದು ಸಂದು ಹೋದ ಕಾಲದ ಮರೆತ ಪದ್ಯವಾದರೂ ಹೊಸ ತಾಳವ ಮೇಳೈಸಿ ಮತ್ತದೇ ಪದ್ಯವ ಇಂಪಾಗಿ ಹಾಡುವ ಅವಶ್ಯಕತೆ ಇಂದಿದೆ. ಬೆಂಗಳೂರಿನ ಒಂದು ಹೆಸರಾಂತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಮಾರು 14 ವರ್ಷಗಳಿಂದ ವೃತ್ತಿ ಜೀವನ ಸವೆಸುತ್ತಿರುವ ಉತ್ತರ ಭಾರತ ಮೂಲದ ಉಪನ್ಯಾಸಕಿ ಒಬ್ಬರು ತುಂಬಿದ ತರಗತಿಯಲ್ಲಿ ತಾನೇಕೆ ಕನ್ನಡ ಕಲಿಯಬೇಕು? ಅದರ ಅವಶ್ಯಕತೆ ಆದರೂ ತನಗೇನಿದೆ ಎಂದಾಗ, ತರಗತಿಯಲ್ಲಿದ್ದ ಅರ್ಧದಷ್ಟು ಕನ್ನಡಿಗ ವಿದ್ಯಾರ್ಥಿಗಳು ತುಟಿಪಿಟಕ್ ಎನ್ನಲಿಲ್ಲ! ಎನ್ನಲಿಲ್ಲಯೆಂದೆನ್ನುವ ಬದಲು ಮಾತನಾಡರು ಎಂದರೆ ಅದು ಉತ್ಪ್ರೇಕ್ಷೆಯಂತೂ ಅಲ್ಲವೇ ಅಲ್ಲ. ಅಚ್ಚ ಕನ್ನಡವನ್ನು ಅಥವಾ ಯಾವುದೇ ಭಾಷೆಯನ್ನು ಆಮೂಲಾಗ್ರವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಕಲಿಯುವ ಅವಶ್ಯಕತೆಯಾದರೂ ಏನು ಎಂಬುದು ಇಂದಿನ ಮೆಟ್ರೋ ನಗರಗಳಲ್ಲಿರುವ ಅದೆಷ್ಟೋ ಯುವಕ ಯುವತಿಯರ ಮನೋಭಾವ.  ಇಂತದೇ ಭ...

Movie Review|ವಿಮರ್ಶೆ ಚಲನಚಿತ್ರ - ಧರಣಿ ಮಂಡಲ ಮಧ್ಯದೊಳಗೆ

Image
                             ಚಲನಚಿತ್ರ ವಿಮರ್ಶೆ  - ಧರಣಿ ಮಂಡಲ ಮಧ್ಯದೊಳಗೆ ಚಲನಚಿತ್ರವೆಂಬ ಸಾರಿಗೊ ಅಥವಾ ಸಾಂಬಾರಿಗೋ , ಕಮರ್ಷಿಯಲ್ ಟಚ್ ಎಂಬ ಇಂಗನ್ನು ರುಚಿಗಾಗಿ,ರುಚಿಯೂ ಕೆಡದಂತೆ, ತಿಂದ ಮೇಲೂ ರುಚಿ ಉಳಿವಂತೆ ಉಣ ಬಡಿಸಿದ್ದು ನಿರ್ದೇಶಕ ಶ್ರೀಧರ್ ಶಿಕಾರಿಪುರ ಅವರ ಕಲಾತ್ಮಕತೆಗೆ ಹಿಡಿದ ಕನ್ನಡಿಯಂತಿದೆ. ವಿವಿಧ ದಿಕ್ಕಿನೆಡೆಗೆ ಸಾಗುವ ಹಲವು ಕಥೆಗಳನ್ನು ಒಂದೆಡೆ ಸೇರಿಸುವ ಪರಿ ಸಾಮಾನ್ಯವೇ ಆದರೂ ಅವುಗಳ ಪಯಣದಲ್ಲಿ ನಿರ್ದೇಶಕರು ಕಟ್ಟಿಕೊಡುವ ನೈಜತೆಗೆ ಹತ್ತಿರವಾದ ಘಟನೆಗಳು ಮತ್ತು ಅದ ಹೆಣೆದ ಬಗೆ ಭಾವನಾತ್ಮಕವೂ, ತರ್ಕಬದ್ಧವೂ, ಹಾಸ್ಯಮಯವೂ ಆಗಿದೆ. ಎಲ್ಲರಿಗೂ ಆಯಾ ಪಾತ್ರಗಳು ಸ್ವಭಾವತಃ ಒಪ್ಪುವಂತಿತ್ತು. ತನ್ನೆಲ್ಲ ಚಟಗಳಿಗೆ ತಂದೆ ತಾಯಿಯರಿಗಿದ್ದ ತನ್ನ ಪಾಲನೆಯ ನಿರ್ಲಕ್ಷ್ಯವನ್ನೇ ದೂಷಿಸುವ, ಡ್ರಗ್ಸ್ ಬಿಡಲಾಗದೆ, ಜೀವನಕ್ಕೆ ಹೊಂದಿಕೊಳ್ಳಲಾಗದೆ ಖಿನ್ನತೆಗೆ ಜಾರುವ ಪಾತ್ರ ಐಶಾನಿ ಶೆಟ್ಟಿ ಅವರಿಗೆ, ಅವರೇ ಪಾತ್ರವೇನೋ ಎನ್ನುವಷ್ಟರಮಟ್ಟಿಗೆ ಒಪ್ಪಿದೆ. ಸಿದ್ದು ಮೂಲಿ ಮನಿಯವರ ಪ್ಯಾರಾಚೂಟ್ ಪಾತ್ರ ವ್ಯಸನದ ಕಿಕ್ಕನ್ನು ಅನುಭವಿಸುವ ಆ ಅನುಭೋಗದ ನಟನೆ ಗಮನಾರ್ಹ.  ಹಾಸ್ಯ ದೃಶ್ಯಗಳನ್ನು ವಿನಾಕಾರಣ ಪೋಣಿಸದೇ , ಕಥೆಯಾಗಿಯೇ ಬಳಸಿಕೊಂಡದ್ದು ಪ್ರೇಕ್ಷಕರ ಗಮನವನ್ನು ಬೇರೆಡೆಗೆ ಹರಿಯಲು ಬಿಡದು. ರೋಣದ ಬಕ್ಕೇಶ್ ...

Movie Review - Hondisi Bareyiri | ಹೊಂದಿಸಿ ಬರೆಯಿರಿ - ಸಿನಿ ವಿಮರ್ಶೆ

Image
  ಹೊಂದಿಸಿ ಬರೆಯಿರಿ - ಸಿನಿ ವಿಮರ್ಶೆ   ಪ್ರೈಮರಿಯಲ್ಲಿದ್ದಾಗ ಪದಗಳನ್ನು ಒಂದಕ್ಕೊಂದು ಹೊಂದಿಸಿ ಅಂಕ ಪಡೆದ ನಮಗೆ, ಒಂದು ದಶಕದ ಓದು ಮುಗಿಸಿ, ನಂತರ ಚಲಿಸುವ ಜೀವನ ಪಥಕ್ಕೆ ಸವಾಲೆನಿಸುವ ಭಾವಗಳ ಹೊಂದಿಸಿ ಸಾಗುವುದು ಸುಲಭವೇನಲ್ಲ. ಇಂಜಿನಿಯರಿಂಗ್ನಲ್ಲಿನ ಮತ್ತು ನಂತರದ ಪರದಾಟ, ಅದರ ಮುಂದಿನ ಮಜಲುಗಳನ್ನು ಧೂಳು ಹಿಡಿದ ಹೊತ್ತಿಗೆಯ ಉಳಿದ ಕೆಲವೇ ಪುಟಗಳಂತೆ ತೆರೆದಿಟ್ಟ ಬಗೆ ರಸಮಯವಾಗಿತ್ತು.'Namduke' ಯೂಟ್ಯೂಬ್ ಚಾನಲ್ನಲ್ಲಿ ನಮ್ಮನ್ನೆಲ್ಲಾ ರಂಜಿಸುತ್ತಿದ್ದ ಅರ್ಜುನ್ ರವರ ಹಾಸ್ಯಮಯ ಪಾತ್ರವನ್ನು ಪರದೆಯ ಮೇಲೆ ನೋಡುವುದು ಸಹಜವಾಗಿ ಮುದವೆನಿಸಿತು.  ಇಂಜಿನಿಯರಿಂಗ್ ಕಾಲೇಜ್ಗಳಲ್ಲಿನ ಸನ್ನಿವೇಶಗಳನ್ನು ತೀರಾ ವೈಭವೀಕರಿಸದೇ ಇದ್ದದ್ದೇ (ಉದಾಹರಣೆಗೆ ಇಂಜಿನಿಯರಿಂಗ್ನ ಫೇರ್ವೆಲ್ ಸಮಾರಂಭ), ವಾಸ್ತವಕ್ಕೆ ತೀರಾ ಹತ್ತಿರದಂತಿರಲು ಕಾರಣ. ಐಷಾನಿ ಶೆಟ್ಟಿ ಅವರ ಮಾತಿನ ಗ್ರಾಮ್ಯ ಕೆಲವೊಮ್ಮೆ ಕಿರಿಕಿರಿ ಎನಿಸಿದರೂ, ಪ್ರೀತಿಯನ್ನೇ ನೆಚ್ಚಿ, ಪ್ರಿಯಕರನನ್ನೇ ಮದುವೆಯಾಗಿ ಉದ್ಯೋಗ ಮತ್ತು ಸಂಸಾರಗಳ ನಡುವೆ ಉದ್ಭವಿಸಿ ಪಿಸುಗುಟ್ಟುವ ಸಮಸ್ಯೆಗಳಿಗೆ ಸ್ವರವಾಗುವಾಗಿನ ನಟನೆಯಿಂದ, ಪಾತ್ರಕ್ಕೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಜೊತೆಗಿದ್ದರೆ ಫೋಕಸ್ ಮಾಡಲು ಅಸಾಧ್ಯ ಎಂಬ ಕಾರಣಕ್ಕೆ ಕೆಲವು ಕಾಲ ಓದಿನ ಸಮಯದಲ್ಲೂ ಮದುವೆಯ ನಂತರದಲ್ಲೂ ದೂರವಿದ್ದು ಸಾಧಿಸುವ ಐಶಾನಿಯವರ ಪಾತ್ರ, ಭಾವಗಳ ಬಂಧಿಯಾಗಿ ನಮ್ಮ ಗುರಿ ಮಂಜಾದಾಗ ಸ್ವಾರ್...